ಆರೋಗ್ಯವೇ ಭಾಗ್ಯ ಗಾದೆ ವಿಸ್ತರಣೆ | Arogyave Bhagya Gade Mathu Vistarane​

ಗಾದೆ ವಿಸ್ತರಣೆ: ಆರೋಗ್ಯವೇ ಭಾಗ್ಯ. ಈ ಗಾದೆಯ ವಿಸ್ತರಣೆ (arogyave bhagya gade mathu vistarane​) ವಿದ್ಯಾರ್ಥಿಗಳು ಅಥವಾ ಇತರರು ಪ್ರಬಂಧ ಬರೆಯಲು ಅಥವಾ ಭಾಷಣ ನೀಡಲು ಸಹಾಯ ಮಾಡುತ್ತದೆ.

Arogyave Bhagya Gade Mathu Vistarane

ಆರೋಗ್ಯವೇ ಭಾಗ್ಯ ಗಾದೆ ವಿಸ್ತರಣೆ | Arogyave Bhagya Gade Mathu Vistarane​

ಗಾದೆಗಳು ಹಿರಿಯರ ಅನುಭವಗಳಿಂದ ಬಂದ ಜ್ಞಾನಮುತ್ತುಗಳಾಗಿವೆ. ವೇದಗಳು ಕೆಲವೊಮ್ಮೆ ತಪ್ಪಾಗಿರಬಹುದು, ಎಲ್ಲರಿಗೂ ಅನ್ವಯವಾಗದಿರಬಹುದು. ಆದರೆ ಗಾದೆಗಳು ಪ್ರತಿಯೊಬ್ಬರ ಜೀವನಕ್ಕೆ ಅನ್ವಯವಾಗುತ್ತವೆ ಮತ್ತು ಸದಾ ಸತ್ಯವಾಗಿರುತ್ತವೆ. ಗಾದೆಗಳ ಮೂಲಕ ನಾವು ಜೀವನದ ತತ್ವಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು ಮತ್ತು ಅವು ನಮ್ಮ ಜೀವನವನ್ನು ಉತ್ತಮಗೊಳಿಸಲು ಮಾರ್ಗದರ್ಶಿಯಾಗುತ್ತವೆ.

ಈ ಗಾದೆ ಆರೋಗ್ಯವು ಎಲ್ಲಾ ರೀತಿಯ ಸಂಪತ್ತಿನಲ್ಲಿ ಶ್ರೇಷ್ಠವೆಂದು ಒತ್ತಿಹೇಳುತ್ತದೆ. ಆರೋಗ್ಯವಿಲ್ಲದೆ ಇತರ ಸಾಧನೆಗಳು ಅಥವಾ ಆಸ್ತಿ-ಪಾಸ್ತಿಗಳು ಅರ್ಥಹೀನವಾಗುತ್ತವೆ.

ಆರೋಗ್ಯ ಮತ್ತು ಹಣದ ಹೋಲಿಕೆ: ಹಣ ಜೀವನಕ್ಕೆ ಅಗತ್ಯವಾದರೂ, ಅದನ್ನು ಆನಂದಿಸಲು ಆರೋಗ್ಯ ಮುಖ್ಯವಾಗಿದೆ. ಈ ಗಾದೆಯು ಆರೋಗ್ಯವು ಸಂಪತ್ತನ್ನು ಗಳಿಸಲು ಮತ್ತು ಆನಂದಿಸಲು ಅಗತ್ಯವೆಂದು ಸೂಚಿಸುತ್ತದೆ. ಆದರೆ ಸಂಪತ್ತಿನಿಂದ ಆರೋಗ್ಯವನ್ನು ಖರೀದಿಸಲು ಸಾಧ್ಯವಿಲ್ಲ.

ಒಮ್ಮೆ ಆರೋಗ್ಯ ಕಳೆದುಕೊಂಡರೆ, ಅದನ್ನು ಮರಳಿ ಪಡೆಯುವುದು ಕಷ್ಟಸಾಧ್ಯ. ಆದ್ದರಿಂದ, ನಾವು ನಮ್ಮ ದೇಹವನ್ನು ಮತ್ತು ಮನಸ್ಸನ್ನು ಸದಾ ಆರೋಗ್ಯಕರವಾಗಿ ಇಡಲು ಪ್ರಯತ್ನಿಸಬೇಕು. ಉತ್ತಮ ಆಹಾರ, ವ್ಯಾಯಾಮ, ಸಮತೋಲನಯುತ ಜೀವನಶೈಲಿ ಮತ್ತು ಒತ್ತಡಮುಕ್ತ ಜೀವನವು ಉತ್ತಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

ಆರೋಗ್ಯವನ್ನು ದೇವರಿಂದ ದೊರೆತ ವರ (ದೇವರು ನೀಡಿದ ಒಂದು ವರ) ಎಂದು ವರ್ಣಿಸಲಾಗಿದೆ, ಇದರ ಅಮೂಲ್ಯತೆಯನ್ನು ತೋರಿಸುತ್ತದೆ. ಉತ್ತಮ ಆರೋಗ್ಯವೊಂದಿದ್ದರೆ ಅದು ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಹಾಯ ಮಾಡುತ್ತದೆ. 

“ಆರೋಗ್ಯವೇ ಭಾಗ್ಯ” ಎಂಬ ಗಾದೆ ನಮ್ಮ ಜೀವನದಲ್ಲಿ ಅತ್ಯಂತ ಮುಖ್ಯವಾದ ಸಂದೇಶವನ್ನು ನೀಡುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ನಾವು ಯಾವಾಗಲೂ ನಮ್ಮ ದೇಹ ಮತ್ತು ಮನಸ್ಸಿನ ಆರೈಕೆಗೆ ಆದ್ಯತೆ ನೀಡಬೇಕು. ಇದು ನಮ್ಮ ಯಶಸ್ಸಿನ ಮತ್ತು ಸಂತೋಷದ ಮೂಲವಾಗಿದೆ.

ಈ ಗಾದೆ ವಿಸ್ತರಣೆಯು ಆರೋಗ್ಯವೇ ಭಾಗ್ಯ ಗಾದೆಯ ಮಹತ್ವವನ್ನು ವಿವರಿಸಿದೆ ಮತ್ತು ಓದುಗರಿಗೆ ತಮ್ಮ ಆರೋಗ್ಯವನ್ನು ಪ್ರಾಮುಖ್ಯತೆಯಿಂದ ಕಾಪಾಡಿಕೊಳ್ಳುವಂತೆ ಪ್ರೇರೇಪಿಸಿದೆ ಎಂದು ಭಾವಿಸುತ್ತೇವೆ. 

ಆರೋಗ್ಯವೇ ಭಾಗ್ಯ ಗಾದೆ ಮಾತಿನ ವಿವರಣೆ | Arogyave Bhagya Gade in Kannada Explanation

ಗಾದೆಗಳು ವೇದಗಳಿಗೆ ಸಮನಾಗಿವೆ. ಗಾದೆಗಳು ಹಿರಿಯರು ನುಡಿದ ನುಡಿಮುತ್ಥುಗಳಾಗಿವೆ. ಆರೋಗ್ಯವೇ ಭಾಗ್ಯ ಎಂಬ್ಬ ಗಾದೆ ಮಾತು ತುಂಬಾ ಅರ್ಥಪೂರ್ಣವಾದ ಗಾದೆ ಮಾತಾಗಿದೆ.

ಮನುಷ್ಯನಿಗೆ ಆರೋಗ್ಯಕ್ಕಿಂತ ಬೆಲೆ ಬಾಳುವ ವಸ್ತು ಮತ್ತೊಂದಿಲ್ಲ. ಎಷ್ಟೇ ಹಣ, ಸಂಪತ್ತು, ಐಶ್ವರ್ಯ ಇದ್ದರೂ ಆರೋಗ್ಯವೆ ಸರಿ ಇಲ್ಲದಿದ್ದರೆ ಏನು ಫಲ. ನಾವು ಆರೋಗ್ಯವಾಗಿದ್ದರೆ ಜೀವನದಲ್ಲಿ ಏನಾದರೂ ಸಾಧಿಸಬಹುದು. ಹಾಗಾಗಿ ನಾವು ಆರೋಗ್ಯಕ್ಕೆ ಪ್ರಾಮುಖ್ಯತೆ ಕೊಡಬೇಕು.

ಆರೋಗ್ಯವೇ ನಮಗೆ ದೊಡ್ಡ ಸಂಪತ್ತು. ಆದರೆ ಇಂದು ಮನುಷ್ಯ ಆರೋಗ್ಯಕ್ಕಿಂತ ಕೆಟ್ಟ ಚಟಗಳಿಗೆ ಪ್ರಮುಖ ಸ್ಥಾನವನ್ನು ನೀಡಿ ಆರೋಗ್ಯವನ್ನು ಹಾಳು ಮಾಡಿಕೊಂಡು ಒತ್ತಡದ ಜೀವನದಿಂದ ಶಾಂತಿ, ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾನೆ. 

100 ವರ್ಷ ಇದ್ದ ಮನುಷ್ಯನ ಜೀವಿತಾವಧಿ ಇಂಡಿ 75 ವರ್ಷಕ್ಕೆ ಬಂದಿದೆ. ಮನುಷ್ಯನು ಆರೋಗ್ಯವಾಗಿರಲು ಅವನ ಜೀವನ ಕ್ರಮ, ಆಹಾರ, ಚಿಂತನೆ ಎಲ್ಲವೂ ಮುಕ್ಯವಾಗುತ್ತದೆ. ಮಾನವನ ದೇಹವು ಆರೋಗ್ಯವಾಗಿರಲು ಸರಿಯಾದ ನಿದ್ರೆ, ವ್ಯಾಯಾಮ, ಪೌಷ್ಟಿಕ ಆಹಾರ ಎಲ್ಲವೂ ಅವಶ್ಯಕವಿದೆ. ಶುಚಿತ್ವಕ್ಕೆ ಸಹ ಮನುಷ್ಯ ಮಹತ್ವವನ್ನು ನೀಡಬೇಕು. ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಬೇಕು. ಹಣ್ಣು-ತರಕಾರಿಗಳ ಸೇವನೆ ಮಾಡಬೇಕು. ಪ್ರತಿದಿನ ಪ್ರತಿಯೊಬ್ಬ ವ್ಯಕ್ತಿಯು ತನ್ನ ದೇಹಕ್ಕೆ ಅನುಗುಣವಾಗಿಯೇ ಕೆಲವು ವ್ಯಾಯಾಮವನ್ನಾದರೂ ಮಾಡಬೇಕು. ದೇಹವನ್ನು ಸದೃಡವಾಗಿರಲು, ಆರೋಗ್ಯವಾಗಿಡಲು, ಚುರುಕಾಗಿಡಲು ಯೋಗವು ಸಹಾಯ ಮಾಡುತ್ತದೆ. ಹೆಚ್ಚೆಚ್ಚು ನೀರನ್ನು ಕುಡಿಯಬೇಕು. ಏಕೆಂದರೆ ನೀರು ದೇಹದ ಪ್ರತಿ ಜೈವಿಕ ಪ್ರಕ್ರಿಯೆಯಲಿ ಸಹಾಯ ಮಾಡುತ್ತದೆ, ಕನಿಷ್ಠ 8 ಗಂಟೆಗಳ ನಿದ್ರೆಯನ್ನು ಮಾಡಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕು.

ಅದೇ ರೀತಿ ಸಮತೋಲನ ಆಹಾರವನ್ನು ಸೇವಿಸಿದರೆ ಉತ್ತಮ ರೋಗನಿರೋಧಕ ಶಕ್ತಿಯನ್ನು ಹೊಂದಿ ಆರೋಗ್ಯವಾಗಿರಬಹುದು. ಉತ್ತಮ ಆರೋಗ್ಯವೆ ನಿಜವಾದ ಸಂಪತ್ತು. ಜೀವನದ ಸವಾಲುಗಳನ್ನು ಎದುರಿಸಲು ನಾವು ಆರೋಗ್ಯ್ವಾಗಿರುವುದು ಅತ್ಯಾವಶ್ಯಕ. ಆರೋಗ್ಯ ಸಮಸ್ಯೆಗಳನ್ನು ದೂರವಿಡಲು ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ನಮ್ಮ ಸುತ್ತಲಿನ ಪರಿಸರವನ್ನು ಸಹ ಕಾಪಾಡಿಕೊಳ್ಳಬೇಕು. ಆರೋಗ್ಯವೆ ದೊಡ್ಡ ಸಂಪತ್ತು. ಹಾಗಾಗಿ ಉತ್ತಮ ಆರೋಗ್ಯವನ್ನು ಹೊಂದೋಣ.

ಇದನ್ನೂ ಓದಿ: 

ಆರೋಗ್ಯವೇ ಭಾಗ್ಯ ಗಾದೆಯ ಸರಳ ಅರ್ಥ | Arogyave Bhagya Gade in Kannada

ಮನುಷ್ಯನಿಗೆ ಆರೋಗ್ಯಕ್ಕಿಂತ ಮಿಗಿಲಾದ ಭಾಗ್ಯ ಬೇರೊಂದಿಲ್ಲ. ನಾನಾ ಬಗೆಯ ಧನ ಸಂಪತ್ಥುಗಳಿದ್ದರೂ ಆರೋಗ್ಯವಿಲ್ಲದಿದ್ದರೆ ಅನುಭವಿಸಲು ಸಾಧ್ಯವಿಲ್ಲ. ಆದ್ದರಿಂದ] ಸರ್ವ ವಿಧದ ಭಾಗ್ಯಗಳಲ್ಲಿ ಆರೋಗ್ಯವೆ ಶ್ರೇಷ್ಟವಾದುದಾಗಿದೆ. ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯಗಳೆರಡು ಅವಶ್ಯ. ಅವುಗಳಲ್ಲಿ ಒಂದರ ಸ್ಥಿತಿ ಹದಗೆಟ್ಟರು ಸಹ ಅವನು ಅನಾರೋಗ್ಯಕ್ಕೆ ಒಳಗಾಗುವುದು ಖಂಡಿತ. ಪೌಷ್ಟಿಕ ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸುವುದು ಮುಖ್ಯ. ಇದರಿಂದ ನಾವು ಒಳ್ಳೆಯ ಆರೋಗ್ಯವನ್ನು ಹೊಂದಬಹುದು. ಇದೇ ಈ ಗಾದೆಯ ಅರ್ಥ.


ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.

All content on this blog is copyrighted and copying is not allowed without permission from the author.